ಭಕ್ತ ಸಾಗರದಲ್ಲಿ ಮುಳುಗಿದ ಅಂಜನಾದ್ರಿಪರ್ವತ

02-12-2017 272
ಕೊಪ್ಪಳ : ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದ ಪ್ರಸಿದ್ಧ ಆಂಜನೇಯ ದೇಗುಲಕ್ಕೆ ಭಕ್ತಸಾಗರದ ಹಿಂಡು ಹರಿದು ಬರ್ತಿದೆ. ಹನುಮ ಜಯಂತಿ ಹಿನ್ನೆಲೆಯಲ್ಲಿ ಭಕ್ತರ ದಂಡೇ ಆಗಮಿಸಿದ್ದು ಆಂಜನೇಯ ಹುಟ್ಟಿರೋ ಈ ಪ್ರವಿತ್ರ ಸ್ಥಳದಲ್ಲಿ ಹನುಮಮಾಲಾಧಾರಿಗಳಿಂದ ಪವಮಾನ ಹೋಮ ಆರಂಭವಾಗಿದೆ. ರಾಜ್ಯ ದ 16 ಜಿಲ್ಲೆ ಯಿಂದ ಭಕ್ತಸಾಗರ ಹರಿದು ಬರುತ್ತಿರುವ ಹಿನ್ನೆಲೆ ಭಾರಿ ಪೊಲೀಸ್ ಬಂದೋಬಸ್ತ್ ನಡುವೆ ಸಾವಿರಾರು ಹನುಮಮಾಲಾಧಾರಿಗಳಿಂದ ಜೈಘೋಷಣೆಯೊಂದಿಗೆ ಹೋಮ ನಡೆಯುತ್ತಿದೆ.
ಒಂದು ಕಮೆಂಟನ್ನು ಹಾಕಿ